

9th July 2026

ಬೆಳಗಾವಿ
ಬೆಳಗಾವಿ ತಾಲೂಕಿನ ಹಾಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ. ರಶ್ಮಿ. ವ್ಹಿ. ಇವರು ಗುರುವಾರ ಆಕಸ್ಮೀಕ ಭೇಟಿ ನೀಡಿದ್ದರು.ಶಾಲೆಯ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಕ್ಕಳ ಚಟುವಟಿಕೆಗಳನ್ನು ಆಲಿಸಿದ ಜಯಕುಮಾರ, ಮಕ್ಕಳೊಂದಿಗೆ ಸಂವಾದ ನಡೆಸಿದರು. ಪ್ರಾರ್ಥನಾ ವೇಳೆಗೆ ಭೇಟಿ ನೀಡಿ ಹಾಲು ವಿವರಣೆ, ಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ, ಹಾಗೂ ನಿರಂತರ ಹಾಜರಾತಿ,ಶಿಕ್ಷಕರ ಹಾಜರಾತಿ (ಕೆಎಎಮ್ಎಸ್) ಮಾಹಿತಿಯನ್ನು, ಶಾಲೆಯಲ್ಲಿ ಬಳಿಕೆಯಾಗುತ್ತಿರುವ ಸ್ಮಾರ್ಟ್ ಬೋರ್ಡ್ ಗಳ ವಿವರ ಪಡೆದು ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಸಂದರ್ಶನ ವೇಳೆ ಧಾರವಾಡದ ಅಪರ ಆಯುಕ್ತ ಡಾ. ಈಶ್ವರ. ಉಳ್ಳಾಗಡ್ಡಿ. ಜೆಡಿ. ಗಿರೀಶ್. ಪದಕಿ. ಡಿಡಿಪಿಐ ಶ್ರೀಮತಿ.ಲೀಲಾವತಿ. ಹಿರೇಮಠ. ಡಿವೈಪಿಸಿ ಬಸವರಾಜ. ವಿಲ್ಲಾನಟ್ಟಿ. ಅಶೋಕ ಕುಂಬಾರ ಬಿಇಓ ಪುಂಡಲೀಕ ಉಪಸ್ಥಿತರಿದ್ದರು.
ಫೋಟೋ ಶಿರ್ಷಕ್ :
ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ. ರಶ್ಮಿ. ವ್ಹಿ. ಇವರು ಹಾಲಗಾ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕ್ಷೀರಭಾಗ್ಯ ವಿಷಯಗಳ ಕುರಿತಂತೆ ಸಂವಾದ ನಡೆಸಿದರು.

ಜಿಲ್ಲಾ ವಕೀಲರ ಸಂಘದ ಚುನಾವಣೆ ಫಲಿತಾಂಶ- ಜಿಲ್ಲಾಧ್ಯಕ್ಷರಾಗಿ ಪ್ರಕಾಶ ಆನಂದಳ್ಳಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಸಜ್ಜನ ಗೆಲುವು- ಉಪಾಧ್ಯಕ್ಷರಾಗಿ ಅಂದಾನಗೌಡ, ಜಂಟಿ ಕಾರ್ಯದರ್ಶಿಯಾಗಿ ಮೇಲುಸಕ್ಕರಿ, ಖಜಾಂಚಿಯಾಗಿ ಪುಷ್ಷಾ ಬೇವೂರಗೆ ಆಯ್ಕೆ

ಎಸ್ಐಆರ್ ವಿಚಾರದಲ್ಲಿ ರಾಯರೆಡ್ಡಿಗೆ ತಿಳುವಳಿಕೆ ಕೊರತೆ- ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ಕುಮಾರ ಗುಳಗಣ್ಣ ಟಾಂಗ್- ಎಸ್ಐಆರ್ ಮೇಲ್ವಿಚಾರಣೆ ರಾಜ್ಯದ ಹೊಣೆ ಎಂಬುದು ಅರಿಯಲಿ